December 2022

ಸಕಲೇಶಪುರದಲ್ಲಿ ನೋಡಲೇಬೇಕಾದ ಸ್ಥಳಗಳು

ಪಶ್ಚಿಮ ಘಟ್ಟಗಳ ಹಚ್ಚ ಹಸಿರಿನ ಕಣಿವೆಗಳ ನಡುವೆ ನೆಲೆಸಿರುವ ಸಕಲೇಶಪುರವು ಹಾಸನ ಜಿಲ್ಲೆಯ ಮಲೆನಾಡು ಭಾಗಕ್ಕೆ ಸೇರುತ್ತದೆ. ಕರ್ನಾಟಕದ ಅತ್ಯಂತ ಜನಪ್ರಿಯ ವಾರಾಂತ್ಯದ ತಾಣಗಳಲ್ಲಿ ಒಂದಾಗಿರುವ ಸಕಲೇಶಪುರದಲ್ಲಿ ನೋಡಲು ಅನೇಕ ಆಸಕ್ತಿದಾಯಕ ಸ್ಥಳಗಳಿವೆ. ತನ್ನ ರಮಣೀಯ ಪ್ರಕೃತಿ ಸೌಂದರ್ಯ, ಕಾಫಿ ಮತ್ತು ಸಾಂಬಾರ ತೋಟಗಳು, ಧುಮ್ಮಿಕ್ಕುವ ಜಲಪಾತಗಳು, ಟ್ರೆಕ್ಕಿಂಗ್ ಹಾದಿಗಳು ಮತ್ತು ಪುರಾತನ ದೇವಾಲಯಗಳಿಗೆ ಈ ಪಟ್ಟಣ ಹೆಸರುವಾಸಿಯಾಗಿದೆ.

ಪರಂಪರೆ, ನಿಸರ್ಗ, ಸಾಹಸ ಮತ್ತು ಇತಿಹಾಸದ ಸಮ್ಮಿಲನವಾಗಿರುವ ಸಕಲೇಶಪುರವು ಎಲ್ಲಾ ಬಗೆಯ ಪ್ರವಾಸಿಗರಿಗೂ ಸೂಕ್ತವಾದ ತಾಣವಾಗಿದೆ. ಸಾಹಸ ಪ್ರಿಯರಿಗೆ, ನಿಸರ್ಗ ಆರಾಧಕರಿಗೆ ಮತ್ತು ಛಾಯಾಗ್ರಹಕರಿಗೆ ಇದು ಸ್ವರ್ಗವಿದ್ದಂತೆ. ಸಕಲೇಶಪುರದಲ್ಲಿ ಭೇಟಿ ನೀಡಲೇಬೇಕಾದ ಪ್ರಮುಖ ಸ್ಥಳಗಳ ಪಟ್ಟಿ ಇಲ್ಲಿದೆ:

ಮಂಜರಾಬಾದ್ ಕೋಟೆ

Manjarabad Fort

ಮಂಜರಾಬಾದ್ ಕೋಟೆ

ಸಕಲೇಶಪುರದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣವೆಂದರೆ, 1792ರಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದ ನಕ್ಷತ್ರ ಆಕಾರದ ಈ ಕೋಟೆ. ಇಲ್ಲಿನ ಸುರಂಗ ಮಾರ್ಗಗಳು, ಕೋಣೆಗಳು, ಕಾವಲು ಕಿಂಡಿಗಳು, ಫಿರಂಗಿ ಇಡುವ ಜಾಗಗಳು ಮತ್ತು ಇದರ ಇತಿಹಾಸವು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮಂಜರಾಬಾದ್ ಕೋಟೆಗೆ ಭೇಟಿ ನೀಡುವುದು ಇತಿಹಾಸದ ಪುಟಗಳನ್ನು ತಿರುವಿ ಹಾಕಿದ ಅನುಭವ ನೀಡುತ್ತದೆ.

ಬಿಸ್ಲೆ ಘಾಟ್ ವೀಕ್ಷಣಾ ತಾಣ

Bisle Ghat

Bisle Ghat Karnataka

ದಟ್ಟವಾದ ಕಾನನ ಮತ್ತು ಹಸಿರಿನಿಂದ ಆವೃತವಾಗಿರುವ ಬಿಸ್ಲೆ ಘಾಟ್ ವೀಕ್ಷಣಾ ತಾಣವು ಸಕಲೇಶಪುರದಿಂದ 42 ಕಿ.ಮೀ ದೂರದಲ್ಲಿದೆ. ಸುಮಾರು 40 ಹೆಕ್ಟೇರ್ ಮೀಸಲು ಅರಣ್ಯ ಪ್ರದೇಶದಲ್ಲಿ ಹರಡಿರುವ ಈ ತಾಣವು ಪಶ್ಚಿಮ ಘಟ್ಟಗಳ ಅದ್ಭುತ ನೋಟವನ್ನು ನೀಡುತ್ತದೆ. ಇಲ್ಲಿಂದ ಪುಷ್ಪಗಿರಿ, ಕುಮಾರ ಪರ್ವತ ಮತ್ತು ಏಣಿಕಲ್ಲು ಗುಡ್ಡಗಳನ್ನು ವೀಕ್ಷಿಸುವುದು ಚಾರಣಿಗರಿಗೆ ಹಬ್ಬವಿದ್ದಂತೆ. ಇಲ್ಲಿ ಆನೆ, ಕಾಡೆಮ್ಮೆ (Indian Gaur), ಕಡವೆ, ಕಾಡುಹಂದಿಯಂತಹ ಪ್ರಾಣಿಗಳು ಕಂಡುಬರುವ ಸಾಧ್ಯತೆಯಿದ್ದು, ಪ್ರಕೃತಿ ಪ್ರಿಯರಿಗೆ ಇದೊಂದು ನೆಚ್ಚಿನ ತಾಣವಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಾಲಯ

Kukke Subramanya Temple

ಕುಕ್ಕೆ ಸುಬ್ರಹ್ಮಣ್ಯ ದೇವಾಲಯ

ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು ಸಕಲೇಶಪುರದ ಸಮೀಪದಲ್ಲಿದೆ (ರಸ್ತೆ ಅಥವಾ ರೈಲು ಮಾರ್ಗದ ಮೂಲಕ). ಪುರಾಣಗಳ ಪ್ರಕಾರ ಪರಶುರಾಮ ಸೃಷ್ಟಿಸಿದ ಏಳು ಪವಿತ್ರ ಕ್ಷೇತ್ರಗಳಲ್ಲಿ ಇದೂ ಒಂದು. ಈ ದೇವಾಲಯವು ಸರ್ಪ ದೋಷ ಪರಿಹಾರ ಪೂಜೆಗಳಿಗೆ ಹೆಸರುವಾಸಿಯಾಗಿದ್ದು, ಪ್ರತಿವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಕುಮಾರ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ಈ ಕ್ಷೇತ್ರವು ಧಾರ್ಮಿಕ ಮತ್ತು ನೈಸರ್ಗಿಕ ಮಹತ್ವವನ್ನು ಹೊಂದಿದೆ.

ಬೆಟ್ಟ ಭೈರವೇಶ್ವರ ದೇವಾಲಯ

ಸಕಲೇಶಪುರದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಬೆಟ್ಟ ಭೈರವೇಶ್ವರ ದೇವಾಲಯವು ಸುಮಾರು 600 ವರ್ಷಗಳಷ್ಟು ಹಳೆಯದಾದ ಶಿವನ ದೇವಾಲಯವಾಗಿದೆ. ಪಶ್ಚಿಮ ಘಟ್ಟಗಳ ಪ್ರಶಾಂತ ವಾತಾವರಣದಲ್ಲಿರುವ ಈ ತಾಣದಲ್ಲಿ, ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಕೆಲಕಾಲ ನೆಲೆಸಿದ್ದರು ಎಂದು ನಂಬಲಾಗಿದೆ. ಜನವರಿ ತಿಂಗಳಲ್ಲಿ ನಡೆಯುವ ವಾರ್ಷಿಕ ಅಭಿಷೇಕದ ಸಮಯದಲ್ಲಿ ಮತ್ತು ಭೈರವ ದೇವರ ಆಶೀರ್ವಾದ ಪಡೆಯಲು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಸಕಲೇಶಪುರದ ಜಲಪಾತಗಳು

ಮಳೆಗಾಲದ ನಂತರ ಇಲ್ಲಿನ ಜಲಪಾತಗಳು ಮೈದುಂಬಿ ಹರಿಯುತ್ತವೆ. ಪ್ರಶಾಂತತೆಯನ್ನು ಬಯಸುವವರಿಗೆ ಇಲ್ಲಿನ ಜಲಪಾತಗಳು ಮುದ ನೀಡುತ್ತವೆ. ಮಂಜೇಹಳ್ಳಿ ಜಲಪಾತ, ಮೂರ್ಕಣ್ಣು ಗುಡ್ಡ ಮತ್ತು ಹಡ್ಲು ಜಲಪಾತ ಹಾಗೂ ಮಗಜಹಳ್ಳಿ ಜಲಪಾತಗಳು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.

ಸಕಲೇಶಪುರದಲ್ಲಿ ಟ್ರೆಕ್ಕಿಂಗ್

Agni Gudda

ಅಗ್ನಿ ಗುಡ್ಡ

ದಕ್ಷಿಣ ಭಾರತದ ಅತ್ಯುತ್ತಮ ಗಿರಿಧಾಮಗಳಲ್ಲಿ ಒಂದಾಗಿರುವ ಸಕಲೇಶಪುರವು ಚಾರಣಿಗರ ಸ್ವರ್ಗವಾಗಿದೆ. ಇಲ್ಲಿನ ಬೆಟ್ಟಗಳನ್ನು ಹತ್ತುವುದು ಆರಂಭಿಕ ಹಂತದ ಚಾರಣಿಗರಿಗೂ ಸುಲಭವಾಗಿದೆ. ಮಂಜಿನಿಂದ ಆವೃತವಾದ ಬೆಟ್ಟಗಳು ಮತ್ತು ದಟ್ಟವಾದ ಕಾಡುಗಳ ನೋಟವು ಚಾರಣವನ್ನು ಮರೆಯಲಾಗದ ಅನುಭವವನ್ನಾಗಿ ಮಾಡುತ್ತದೆ. ಜೇನುಕಲ್ ಗುಡ್ಡ, ಒಂಬತ್ತು ಗುಡ್ಡ ಮತ್ತು ಅಗ್ನಿ ಗುಡ್ಡಗಳು ಚಾರಣಕ್ಕೆ ಜನಪ್ರಿಯವಾಗಿವೆ.

ತಲುಪುವುದು ಹೇಗೆ?

ಪಶ್ಚಿಮ ಘಟ್ಟಗಳ ಹೃದಯಭಾಗದಲ್ಲಿರುವ ಸಕಲೇಶಪುರಕ್ಕೆ ರಸ್ತೆ ಮತ್ತು ರೈಲು ಮಾರ್ಗಗಳ ಮೂಲಕ ಸುಲಭವಾಗಿ ತಲುಪಬಹುದು.

ರಸ್ತೆ ಮೂಲಕ: ಬೆಂಗಳೂರು, ಹಾಸನ, ಮಂಗಳೂರು ಮತ್ತು ಮೈಸೂರಿನಿಂದ ಸಕಲೇಶಪುರಕ್ಕೆ ಉತ್ತಮ ರಸ್ತೆ ಸಂಪರ್ಕವಿದೆ. ಕೆ.ಎಸ್.ಆರ್.ಟಿ.ಸಿ (KSRTC) ಬಸ್‌ಗಳು ರಾಜ್ಯದ ಪ್ರಮುಖ ನಗರಗಳಿಂದ ಇಲ್ಲಿಗೆ ಸಂಚರಿಸುತ್ತವೆ.

ವಿಮಾನದ ಮೂಲಕ: ಸಕಲೇಶಪುರದಲ್ಲಿ ವಿಮಾನ ನಿಲ್ದಾಣವಿಲ್ಲ. ಮಂಗಳೂರು ವಿಮಾನ ನಿಲ್ದಾಣವು ಇಲ್ಲಿಗೆ ಹತ್ತಿರವಾಗಿದ್ದು (ಸುಮಾರು 150 ಕಿ.ಮೀ), ಅಲ್ಲಿಂದ ರಸ್ತೆ ಅಥವಾ ರೈಲು ಮೂಲಕ 3 ಗಂಟೆಗಳಲ್ಲಿ ತಲುಪಬಹುದು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಸುಮಾರು 240 ಕಿ.ಮೀ ದೂರದಲ್ಲಿದೆ.

ರೈಲು ಮೂಲಕ: ಬೆಂಗಳೂರು ಮತ್ತು ಮಂಗಳೂರಿನಿಂದ ಸಕಲೇಶಪುರಕ್ಕೆ ಇರುವ ರೈಲು ಮಾರ್ಗವು ಅತ್ಯಂತ ರಮಣೀಯವಾಗಿದೆ. ಪಶ್ಚಿಮ ಘಟ್ಟಗಳ ಹಸಿರು ಸಿರಿ, ಜಲಪಾತಗಳು ಮತ್ತು ಮಂಜಿನ ಬೆಟ್ಟಗಳ ಸೌಂದರ್ಯವನ್ನು ಸವಿಯಲು ‘ವಿಸ್ಟಾಡೋಮ್’ (Vistadome) ಕೋಚ್‌ಗಳಲ್ಲಿ ಪ್ರಯಾಣಿಸುವುದು ಉತ್ತಮ.

ಮತ್ತಷ್ಟು ತಾಣಗಳನ್ನು ಅನ್ವೇಷಿಸಿ

ವಿಸ್ಟಾಡೋಮ್ ರೈಲು
Vistadome Train Bangalore to Mangalore
ಮಂಜರಾಬಾದ್ ಕೋಟೆ
Manjarabad Fort
ಹಾಸನ
Hassan