ಪ್ರಮುಖ ಮಾಹಿತಿ: ಪ್ರಮುಖ ಮಾಹಿತಿ: ಹೋಮ್‌ಸ್ಟೇಗಳ ನೋಂದಣಿ ಮತ್ತು ನಿರ್ವಹಣೆಯ ಅಧಿಸೂಚಿತ ಮಾರ್ಗಸೂಚಿಗಳು, ದಿನಾಂಕ 29.04.2026 (ಮಾರ್ಗಸೂಚಿಗಳನ್ನು ವೀಕ್ಷಿಸಿ) | ಹೋಮ್‌ಸ್ಟೇ ಸುತ್ತೋಲೆ, ದಿನಾಂಕ 27.04.2026 (ಸುತ್ತೋಲೆಯನ್ನು ವೀಕ್ಷಿಸಿ)

Karnataka_Tourism
|ಲಾಗಿನ್ ಮಾಡಿ
Karnataka_Tourism_Logo

ಸಂಬಂಧಿತ ಕೊಂಡಿಗಳು

kstdc logo

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

Jungle lodges logo

ಜಂಗಲ್ ಲಾಡ್ಜಸ್ ಮತ್ತು ರಿಸಾರ್ಟ್ಸ್

X (Twitter)

ಸಂಬಂಧಿತ ಕೊಂಡಿಗಳು

kstdc logo

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

Jungle lodges logo

ಜಂಗಲ್ ಲಾಡ್ಜಸ್ ಮತ್ತು ರಿಸಾರ್ಟ್ಸ್

ನಮ್ಮನ್ನು ಸಂಪರ್ಕಿಸಿ

ಮುಖ್ಯ ಕಚೇರಿ ವಿಳಾಸ:

ಪ್ರವಾಸೋದ್ಯಮ ಇಲಾಖೆ 5ನೇ ಮಹಡಿ, ಇಂಧನ ಭವನ, ರೇಸ್ ಕೋರ್ಸ್ ರಸ್ತೆ,

ಬೆಂಗಳೂರು-560 009, ಕರ್ನಾಟಕ, ಭಾರತ

☎ +91-80-2235-2828

[email protected]

ಎಲ್ಲಿಗೆ ಹೋಗಬೇಕು

ಗಮ್ಯಸ್ಥಾನಗಳುಅನುಭವಗಳುಆಕರ್ಷಣೆಗಳುಕಾರ್ಯಕ್ರಮಗಳು ಮತ್ತು ರೋಡ್‌ಶೋಗಳು

ನಿಮ್ಮ ಪ್ರವಾಸವನ್ನು ಯೋಜಿಸಿ

ವಿಶೇಷ ಪ್ರವಾಸಗಳುಪ್ರವಾಸ ಸಲಹೆಗಳುವಸತಿ ವ್ಯವಸ್ಥೆಸಾರಿಗೆವೀಸಾ ಮತ್ತು ಪ್ರವಾಸ ದಾಖಲೆಗಳು

ಹೊಸದೇನು

ಇತ್ತೀಚಿನಬ್ಲಾಗ್‌ಗಳುಸ್ಪರ್ಧೆಗಳುಟೆಂಡರ್‌ಗಳುಹೆಚ್ಚು

ವ್ಯಾಪಾರ ಮತ್ತು ಪಾಲುದಾರಿಕೆ

ಸರ್ಕಾರಿ ಸೇವೆಗಳುಹೂಡಿಕೆ ಅವಕಾಶಗಳು

ಕೊನೆಯದಾಗಿ ಪರಿಶೀಲಿಸಿ ನವೀಕರಿಸಿದ ದಿನಾಂಕ: 16 July 2026

ನಿಯಮಗಳು ಮತ್ತು ಷರತ್ತುಗಳುಸೈಟ್ ನಕ್ಷೆಪದೇ ಪದೇ ಕೇಳಲಾಗುವ ಪ್ರಶ್ನೆಗಳುನಿರಾಕರಣೆಕುಕೀ ನೀತಿಗೌಪ್ಯತಾ ನೀತಿಪ್ರತಿಕ್ರಿಯೆನಮ್ಮ ಬಗ್ಗೆ

ಕೊನೆಯದಾಗಿ ಪರಿಶೀಲಿಸಿ ನವೀಕರಿಸಿದ ದಿನಾಂಕ: 16 July 2026

ಹಕ್ಕುಸ್ವಾಮ್ಯ © 2026 ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ

ನೀಲಗುಂದ ಭೀಮೇಶ್ವರ ದೇವಾಲಯ

ಶಿಲ್ಪಕಲೆಯ ಸೌಂದರ್ಯ

ನೀಲಗುಂದ ಗ್ರಾಮವು ಕಲ್ಯಾಣ ಚಾಲುಕ್ಯರ ಕಾಲದಿಂದಲೂ ಅತ್ಯಂತ ಪ್ರಮುಖವಾದ ಗ್ರಾಮವಾಗಿದೆ. ಇಲ್ಲಿನ ಸುಂದರವಾದ ಕೆರೆ ಮತ್ತು ಸುತ್ತಲಿನ ಗುಡ್ಡಗಾಡು ಪ್ರದೇಶದ ನಡುವೆ ನೆಲೆಸಿರುವ ಈ ದೇವಾಲಯವು ಪ್ರಶಾಂತತೆಗೆ ಹೆಸರುವಾಸಿ.

ದೇವಾಲಯದ ಹೊರಗಿರುವ ಮಾಹಿತಿ ಫಲಕದ ಪ್ರಕಾರ, ಇದನ್ನು ಕ್ರಿ.ಶ. ೧೧ನೇ ಶತಮಾನದ ಅಂತ್ಯಭಾಗದಲ್ಲಿ ಚಾಲುಕ್ಯರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ನೀಲಗುಂದವು ತನ್ನ ಬಳಪದ ಕಲ್ಲಿನ (Soapstone) ಕ್ವಾರಿಗಳಿಗೆ ಪ್ರಸಿದ್ಧವಾಗಿದ್ದು, ಇಲ್ಲಿನ ದೇವಾಲಯ ನಿರ್ಮಾಣಕ್ಕೆ ಅದೇ ಕಲ್ಲನ್ನು ಬಳಸಲಾಗಿದೆ.

Bhimeshvara Temple, Nilagunda

Bhimeshvara temple Interiors

ವಿಶೇಷತೆಗಳು ಮತ್ತು ವಾಸ್ತುಶಿಲ್ಪ:

ರಾಷ್ಟ್ರೀಯ ಸ್ಮಾರಕ: ಇದು ಭಾರತೀಯ ಪುರಾತತ್ವ ಇಲಾಖೆಯ (ASI) ಅಡಿಯಲ್ಲಿ ಸಂರಕ್ಷಿಸಲ್ಪಟ್ಟ ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವಾಗಿದೆ

ತ್ರಿಕೂಟಾಚಲ ವಿನ್ಯಾಸ: ಈ ದೇವಾಲಯವು ಉತ್ತರ, ಪಶ್ಚಿಮ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಮೂರು ಗರ್ಭಗೃಹಗಳನ್ನು ಹೊಂದಿದ್ದು, ಪ್ರತಿಯೊಂದೂ ಅಂತರಾಳದೊಂದಿಗೆ ಕೂಡಿದೆ. ಈ ಗರ್ಭಗೃಹಗಳ ದ್ವಾರಗಳು ಅತ್ಯಂತ ಕಲಾತ್ಮಕ ಕೆತ್ತನೆಗಳಿಂದ ಕೂಡಿದ್ದು, ಸಭಾ ಮಂಟಪ ಮತ್ತು ಮುಖ ಮಂಟಪಕ್ಕೆ ತೆರೆದುಕೊಳ್ಳುತ್ತವೆ.

ದೈವತ್ವದ ನೆಲೆ: ಈ ದೇವಾಲಯವು ಶಿವನಿಗೆ ಅರ್ಪಿತವಾಗಿದೆ. ಇಲ್ಲಿರುವ ಶಿವಲಿಂಗವನ್ನು ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಪ್ರತಿಷ್ಠಾಪಿಸಿದರು ಎಂಬ ಐತಿಹ್ಯವಿದೆ. ಪಶ್ಚಿಮದ ಗರ್ಭಗುಡಿಯ ಕಡೆಗೆ ಮುಖ ಮಾಡಿರುವ ಪುಟ್ಟ ನಂದಿಯ ವಿಗ್ರಹವು ಬಹಳ ಆಕರ್ಷಕವಾಗಿದೆ.

ಕಲಾತ್ಮಕ ಕೆತ್ತನೆಗಳು: ದೇವಾಲಯದ ಗೋಪುರ ಮತ್ತು ಒಳಾಂಗಣವು ಹೊಯ್ಸಳ ಶೈಲಿಯ ಸೂಕ್ಷ್ಮ ಕೆತ್ತನೆಗಳನ್ನು ನೆನಪಿಸುತ್ತವೆ. ಗಣೇಶ, ಸಪ್ತಮಾತೃಕೆಯರು ಮತ್ತು ಮಹಿಷಾಸುರಮರ್ಧಿನಿಯಂತಹ ವಿವಿಧ ಹಿಂದೂ ದೇವತೆಗಳ ಶಿಲ್ಪಗಳು ಒಳಗಿನ ಗೋಡೆಗಳನ್ನು ಅಲಂಕರಿಸಿವೆ.

ಪ್ರವಾಸಿಗರಿಗೆ ಮಾಹಿತಿ:

ತಲುಪುವ ಹಾದಿ:

  • ವಿಮಾನ: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಸುಮಾರು ೩೦೦ ಕಿ.ಮೀ ದೂರದಲ್ಲಿದೆ.
  • ರೈಲು: ಬೆಂಗಳೂರಿನಿಂದ ದಾವಣಗೆರೆಗೆ ರೈಲು ಸೌಲಭ್ಯವಿದ್ದು, ಸುಮಾರು ೪:೩೦ ಗಂಟೆಗಳ ಪ್ರಯಾಣವಾಗಿದೆ. ದಾವಣಗೆರೆಯಿಂದ ಹರಪನಹಳ್ಳಿಗೆ ರಸ್ತೆ ಮಾರ್ಗದ ಮೂಲಕ ಒಂದು ಗಂಟೆಯಲ್ಲಿ ತಲುಪಬಹುದು.
  • ರಸ್ತೆ: ದಾವಣಗೆರೆಯಿಂದ ಹರಪನಹಳ್ಳಿಗೆ ಮತ್ತು ಅಲ್ಲಿಂದ ನೀಲಗುಂದಕ್ಕೆ ರಾಜ್ಯ ಸಾರಿಗೆ ಬಸ್ಸುಗಳು ಅಥವಾ ಸ್ವಂತ ವಾಹನದ ಮೂಲಕ ಸುಲಭವಾಗಿ ತಲುಪಬಹುದು.

ಸಮಯ ಮತ್ತು ಶುಲ್ಕ:

ಪ್ರವೇಶ ಶುಲ್ಕ: ದೇವಾಲಯಕ್ಕೆ ಪ್ರವೇಶ ಉಚಿತವಾಗಿದೆ.

ದರ್ಶನದ ಸಮಯ: ಪ್ರತಿದಿನ ಬೆಳಿಗ್ಗೆ ೫:೩೦ ರಿಂದ ಸಂಜೆ ೭:೦೦ ರವರೆಗೆ.