ಹೋಮ್‌ಸ್ಟೇ ಮತ್ತು ಬೆಡ್ & ಬ್ರೇಕ್‌ಫಾಸ್ಟ್‌ಗಳ ಕಾರ್ಯಾಚರಣೆ, ಸುರಕ್ಷತೆ ಮತ್ತು ಭದ್ರತಾ ನಿಯಮಾವಳಿಗಳ ಕುರಿತಾದ ಸುತ್ತೋಲೆ. ಇಲ್ಲಿ

Karnataka_Tourism
|ಲಾಗಿನ್ ಮಾಡಿ
Karnataka_Tourism_Logo

ಸಂಬಂಧಿತ ಕೊಂಡಿಗಳು

kstdc logo

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

Jungle lodges logo

ಜಂಗಲ್ ಲಾಡ್ಜಸ್ ಮತ್ತು ರಿಸಾರ್ಟ್ಸ್

X (Twitter)

ಸಂಬಂಧಿತ ಕೊಂಡಿಗಳು

kstdc logo

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

Jungle lodges logo

ಜಂಗಲ್ ಲಾಡ್ಜಸ್ ಮತ್ತು ರಿಸಾರ್ಟ್ಸ್

ನಮ್ಮನ್ನು ಸಂಪರ್ಕಿಸಿ

ಮುಖ್ಯ ಕಚೇರಿ ವಿಳಾಸ: ಕಮಿಷನರ್ ಕಚೇರಿ

ಪ್ರವಾಸೋದ್ಯಮ ಇಲಾಖೆ 5ನೇ ಮಹಡಿ, ಇಂಧನ ಭವನ, ರೇಸ್ ಕೋರ್ಸ್ ರಸ್ತೆ,

ಬೆಂಗಳೂರು-560 009, ಕರ್ನಾಟಕ, ಭಾರತ

☎ +91-80-2235-2828

[email protected]

ಎಲ್ಲಿಗೆ ಹೋಗಬೇಕು

ಗಮ್ಯಸ್ಥಾನಗಳುಅನುಭವಗಳುಆಕರ್ಷಣೆಗಳುಕಾರ್ಯಕ್ರಮಗಳು ಮತ್ತು ರೋಡ್‌ಶೋಗಳು

ನಿಮ್ಮ ಪ್ರವಾಸವನ್ನು ಯೋಜಿಸಿ

ವಿಶೇಷ ಪ್ರವಾಸಗಳುಪ್ರವಾಸ ಸಲಹೆಗಳುವಸತಿ ವ್ಯವಸ್ಥೆಸಾರಿಗೆವೀಸಾ ಮತ್ತು ಪ್ರವಾಸ ದಾಖಲೆಗಳು

ಹೊಸದೇನು

ಇತ್ತೀಚಿನಬ್ಲಾಗ್‌ಗಳುಸ್ಪರ್ಧೆಗಳುಟೆಂಡರ್‌ಗಳುಹೆಚ್ಚು

ವ್ಯಾಪಾರ ಮತ್ತು ಪಾಲುದಾರಿಕೆ

ಸರ್ಕಾರಿ ಸೇವೆಗಳುಹೂಡಿಕೆ ಅವಕಾಶಗಳು

ಕೊನೆಯದಾಗಿ ಪರಿಶೀಲಿಸಿ ನವೀಕರಿಸಿದ ದಿನಾಂಕ: 07 May 2026

ನಿಯಮಗಳು ಮತ್ತು ಷರತ್ತುಗಳುಸೈಟ್ ನಕ್ಷೆಪದೇ ಪದೇ ಕೇಳಲಾಗುವ ಪ್ರಶ್ನೆಗಳುನಿರಾಕರಣೆಕುಕೀ ನೀತಿಗೌಪ್ಯತಾ ನೀತಿಪ್ರತಿಕ್ರಿಯೆನಮ್ಮ ಬಗ್ಗೆ

ಕೊನೆಯದಾಗಿ ಪರಿಶೀಲಿಸಿ ನವೀಕರಿಸಿದ ದಿನಾಂಕ: 07 May 2026

ಹಕ್ಕುಸ್ವಾಮ್ಯ © 2026 ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ

Hero Image

ಬೆಂಗಳೂರು

ಭಾರತದ ಸಿಲಿಕಾಲ್ ಕಣಿವೆ

ನಿರಂತರವಾಗಿ ಬೆಳೆಯುತ್ತಿರುವ ಮಹಾನಗರವಾಗಿದ್ದರೂ, ತನ್ನ ಮೂಲ ಪರಂಪರೆಯನ್ನು ಉಳಿಸಿಕೊಂಡಿರುವ ಬೆಂಗಳೂರು ಅನೇಕ ವಿಶೇಷತೆಗಳನ್ನು ಒಳಗೊಂಡಿದೆ.
ಜಾಗತಿಕವಾಗಿ ‘ಭಾರತದ ತಂತ್ರಜ್ಞಾನ ರಾಜಧಾನಿ’ ಎಂದು ಗುರುತಿಸಿಕೊಂಡಿರುವ ಇದು, ತನ್ನ ಸುಂದರ ಉದ್ಯಾನವನಗಳು, ಐತಿಹಾಸಿಕ ಸಂಸ್ಥೆಗಳು, ಕಲೆ ಮತ್ತು ವೈವಿಧ್ಯಮಯ ಜೀವನಶೈಲಿಗೆ ಅಷ್ಟೇ ಹೆಸರುವಾಸಿಯಾಗಿದೆ. ಇಲ್ಲಿನ ಆಧುನಿಕ ಆಕಾಶಚುಂಬಿ ಕಟ್ಟಡಗಳ ನೆರಳಿನಲ್ಲೇ, ರಾಜವಂಶಗಳು, ವಸಾಹತುಶಾಹಿ ಪ್ರಭಾವಗಳು ಮತ್ತು ಬಲವಾದ ನಾಗರಿಕ ಸಂಸ್ಕೃತಿಯಿಂದ ರೂಪುಗೊಂಡ ದೀರ್ಘ ಇತಿಹಾಸವೂ ಅಡಗಿದೆ.

ಬೆಂಗಳೂರಿನ ಸೌಂದರ್ಯವು ಅದರ ವೈರುಧ್ಯಗಳಲ್ಲಿದೆ. ಇಲ್ಲಿ ಶತಮಾನಗಳಷ್ಟು ಹಳೆಯದಾದ ಮಾರುಕಟ್ಟೆಗಳು ಮತ್ತು ಸಮಕಾಲೀನ ಕೆಫೆಗಳು ಅಕ್ಕಪಕ್ಕದಲ್ಲಿವೆ. ಮರಗಳ ಸಾಲಿನಿಂದ ಕೂಡಿದ ರಸ್ತೆಗಳು ನಗರದ ವೇಗಕ್ಕೆ ಹಿತವಾದ ಸ್ಪರ್ಶ ನೀಡುತ್ತವೆ. ಪರಂಪರೆಯ ಕಟ್ಟಡಗಳು ಮತ್ತು ನಾವೀನ್ಯತೆಯ ಕೇಂದ್ರಗಳು ಒಟ್ಟಿಗೆ ಸಾಗುತ್ತವೆ. ನೀವು ಇತಿಹಾಸ, ನಿಸರ್ಗ, ಆಹಾರ ಅಥವಾ ಸೃಜನಶೀಲತೆಯನ್ನು ಹುಡುಕುತ್ತಿದ್ದರೆ, ಬೆಂಗಳೂರು ನಿಮಗೆ ಸಮೃದ್ಧವಾದ ಅನುಭವವನ್ನು ನೀಡುತ್ತದೆ.

ಪರಂಪರೆ ಮತ್ತು ನಾಗರಿಕ ವಲಯ (ವಾಸ್ತುಶಿಲ್ಪ ಮತ್ತು ಇತಿಹಾಸ)

ಬೆಂಗಳೂರಿನ ಗತವೈಭವವನ್ನು ಇಲ್ಲಿನ ಅರಮನೆಗಳು, ಸರ್ಕಾರಿ ಕಟ್ಟಡಗಳು ಮತ್ತು ಪ್ರಮುಖ ಸ್ಥಳಗಳ ಮೂಲಕ ಕಾಣಬಹುದು.

  • ಬೆಂಗಳೂರು ಅರಮನೆ: ಇಂಗ್ಲೆಂಡ್‌ನ ವಿಂಡ್ಸರ್ ಕ್ಯಾಸಲ್ ಮಾದರಿಯಲ್ಲಿ ನಿರ್ಮಿಸಲಾದ ಈ 19ನೇ ಶತಮಾನದ ಅರಮನೆ, ನಗರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಮೈಸೂರಿನ ಒಡೆಯರ್ ರಾಜವಂಶಸ್ಥರಿಗಾಗಿ ಟ್ಯೂಡರ್ ಶೈಲಿಯಲ್ಲಿ ನಿರ್ಮಿಸಲಾದ ಈ ಅರಮನೆಯು, ತನ್ನ ಒಳಾಂಗಣ ವಿನ್ಯಾಸ, ದರ್ಬಾರ್ ಹಾಲ್ ಮತ್ತು ವಿಶಾಲವಾದ ಮೈದಾನಗಳ ಮೂಲಕ ರಾಜವೈಭವವನ್ನು ಪ್ರತಿಬಿಂಬಿಸುತ್ತದೆ.
  • ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ: 18ನೇ ಶತಮಾನದ ಉತ್ತರಾರ್ಧದಲ್ಲಿ ನಿರ್ಮಿಸಲಾದ ಈ ಇಂಡೋ-ಇಸ್ಲಾಮಿಕ್ ಶೈಲಿಯ ಅರಮನೆಯು, ಮೈಸೂರು ಹುಲಿ ಟಿಪ್ಪು ಸುಲ್ತಾನರ ಬೇಸಿಗೆಯ ತಾಣವಾಗಿತ್ತು. ಸಂಪೂರ್ಣವಾಗಿ ತೇಗದ ಮರದಿಂದ (Teakwood) ನಿರ್ಮಿಸಲಾದ ಈ ಕಟ್ಟಡವು ನಗರದ ವಸಾಹತುಪೂರ್ವ ಇತಿಹಾಸಕ್ಕೆ ಸಾಕ್ಷಿಯಾಗಿದೆ.
  • ವಿಧಾನಸೌಧ: ಆಡಳಿತದ ಶಕ್ತಿ ಕೇಂದ್ರವಾಗಿರುವ ಈ ಬೃಹತ್ ಗ್ರಾನೈಟ್ ಕಟ್ಟಡವು, ದ್ರಾವಿಡ ಮತ್ತು ಆಧುನಿಕ ವಾಸ್ತುಶಿಲ್ಪ ಶೈಲಿಗಳ ಸಮ್ಮಿಲನವಾಗಿದೆ. ಇದು ಬೆಂಗಳೂರಿನ ಅತ್ಯಂತ ಗುರುತಿಸಬಹುದಾದ ಹೆಗ್ಗುರುತಾಗಿದೆ.
  • ಕೆ.ಆರ್. ಮಾರುಕಟ್ಟೆ: ನಗರದ ಅತಿದೊಡ್ಡ ಸಗಟು ಮಾರುಕಟ್ಟೆಗಳಲ್ಲಿ ಒಂದಾದ ಇದು, ಹೂವು, ಹಣ್ಣುಗಳ ಬಣ್ಣಗಳು ಮತ್ತು ದೈನಂದಿನ ವ್ಯಾಪಾರದ ಲಯದೊಂದಿಗೆ ಜೀವಂತಿಕೆಯ ದರ್ಶನ ನೀಡುತ್ತದೆ.

ಉದ್ಯಾನವನಗಳು, ಕೆರೆಗಳು ಮತ್ತು ಹೊರಾಂಗಣ ತಾಣಗಳು

‘ಉದ್ಯಾನ ನಗರಿ’ ಎಂದು ಕರೆಯಲ್ಪಡುವ ಬೆಂಗಳೂರು, ಹಸಿರು ತಾಣಗಳು ಮತ್ತು ಮುಕ್ತ ಪ್ರದೇಶಗಳಿಗೆ ಹೆಸರುವಾಸಿಯಾಗಿದೆ.

  • ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್: 1760ರಲ್ಲಿ ಹೈದರ್ ಅಲಿ ಸ್ಥಾಪಿಸಿದ ಮತ್ತು ನಂತರ ಟಿಪ್ಪು ಸುಲ್ತಾನ್ ವಿಸ್ತರಿಸಿದ ಲಾಲ್‌ಬಾಗ್, ದಕ್ಷಿಣ ಏಷ್ಯಾದ ಅತ್ಯಂತ ಪ್ರಮುಖ ಉದ್ಯಾನವನಗಳಲ್ಲಿ ಒಂದಾಗಿದೆ. 240 ಎಕರೆ ಪ್ರದೇಶದಲ್ಲಿ ಹರಡಿರುವ ಇದು, ಸಸ್ಯ ವೈವಿಧ್ಯತೆ ಮತ್ತು ಐತಿಹಾಸಿಕ ಗಾಜಿನ ಮನೆಗೆ (Glass House) ಪ್ರಸಿದ್ಧವಾಗಿದೆ. ಇದು ಕೇವಲ ಪ್ರವಾಸಿ ತಾಣವಷ್ಟೇ ಅಲ್ಲದೆ, ಪ್ರಮುಖ ತೋಟಗಾರಿಕಾ ಸಂಶೋಧನಾ ಕೇಂದ್ರವೂ ಆಗಿದೆ.
  • ಕಬ್ಬನ್ ಪಾರ್ಕ್: 1870ರಲ್ಲಿ ಸ್ಥಾಪಿಸಲಾದ ಕಬ್ಬನ್ ಪಾರ್ಕ್, ನಗರದ ಹೃದಯಭಾಗದಲ್ಲಿರುವ ಹಸಿರು ಶ್ವಾಸಕೋಶದಂತಿದೆ. ಸುಮಾರು 300 ಎಕರೆಗಳಷ್ಟು ವಿಸ್ತಾರವಾಗಿರುವ ಇದು, ಸಸ್ಯ ಸಂಪತ್ತು ಮತ್ತು ವಸಾಹತುಶಾಹಿ ಕಾಲದ ವಾಸ್ತುಶಿಲ್ಪದ ಕಟ್ಟಡಗಳನ್ನು ಹೊಂದಿದೆ.
  • ಬೆಂಗಳೂರಿನ ಕೆರೆಗಳು: ಹಲಸೂರು ಕೆರೆ ಮತ್ತು ಸ್ಯಾಂಕಿ ಕೆರೆಯಂತಹ ಜಲಮೂಲಗಳು ನಗರದೊಳಗೆ ವಾಕಿಂಗ್ ಮತ್ತು ವಿರಾಮಕ್ಕೆ ಪ್ರಶಾಂತ ತಾಣಗಳನ್ನು ಒದಗಿಸುತ್ತವೆ.

ಜೀವಂತ ಸಂಸ್ಕೃತಿ: ಕಲೆ, ಆಹಾರ ಮತ್ತು ಸ್ಥಳೀಯ ಜೀವನ

ಆಹಾರ ವೈವಿಧ್ಯ ಬೆಂಗಳೂರಿನ ಆಹಾರ ಪದ್ಧತಿಯು ಕರ್ನಾಟಕದ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ. ಸಾಂಪ್ರದಾಯಿಕ ದರ್ಶಿನಿ ಹೋಟೆಲ್‌ಗಳಲ್ಲಿ ಸಿಗುವ ಇಡ್ಲಿ, ದೋಸೆ ಮತ್ತು ಫಿಲ್ಟರ್ ಕಾಫಿಯಿಂದ ಹಿಡಿದು, ಪ್ರಾದೇಶಿಕ ರುಚಿಗಳನ್ನು ನೀಡುವ ಆಧುನಿಕ ಹೋಟೆಲ್‌ಗಳವರೆಗೆ, ಈ ನಗರವು ಆಹಾರ ಪ್ರಿಯರ ಸ್ವರ್ಗವಾಗಿದೆ.

ಕಲೆ, ಸಂಗೀತ ಮತ್ತು ರಂಗಭೂಮಿ ನಗರವು ವರ್ಷವಿಡೀ ಸಾಂಸ್ಕೃತಿಕ ಚಟುವಟಿಕೆಗಳಿಂದ ತುಂಬಿರುತ್ತದೆ. ರವೀಂದ್ರ ಕಲಾಕ್ಷೇತ್ರ, ಚೌಡಯ್ಯ ಸ್ಮಾರಕ ಭವನ ಮತ್ತು ಇತರ ತೆರೆದ ವೇದಿಕೆಗಳಲ್ಲಿ ಶಾಸ್ತ್ರೀಯ ಸಂಗೀತ ಕಚೇರಿಗಳು, ನಾಟಕ ಪ್ರದರ್ಶನಗಳು, ಕಲಾ ಪ್ರದರ್ಶನಗಳು ಮತ್ತು ಸಾಹಿತ್ಯ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ.

ಶಾಪಿಂಗ್ ಮತ್ತು ಮಾರುಕಟ್ಟೆಗಳು ಸಾಂಪ್ರದಾಯಿಕ ರೇಷ್ಮೆ ಸೀರೆಗಳು, ಕರಕುಶಲ ವಸ್ತುಗಳು ಮತ್ತು ಸಾಂಬಾರ ಪದಾರ್ಥಗಳಿಂದ ಹಿಡಿದು ಆಧುನಿಕ ವಿನ್ಯಾಸದ ಮಳಿಗೆಗಳವರೆಗೆ, ಬೆಂಗಳೂರು ಪರಂಪರೆ ಮತ್ತು ಆಧುನಿಕತೆಯ ಮಿಶ್ರಣದ ಶಾಪಿಂಗ್ ಅನುಭವವನ್ನು ನೀಡುತ್ತದೆ.

ಹಬ್ಬಗಳು ಮತ್ತು ಉತ್ಸವಗಳು

  • ಬೆಂಗಳೂರು ಕರಗ:

    ಸಮಯ: ಮಾರ್ಚ್ ಅಥವಾ ಏಪ್ರಿಲ್.

    ವಿಶೇಷತೆ: ಬೆಂಗಳೂರಿನ ಅತ್ಯಂತ ಹಳೆಯ ಹಬ್ಬಗಳಲ್ಲಿ ಒಂದಾದ ಕರಗ ಶಕ್ತ್ಯೋತ್ಸವವನ್ನು ದ್ರೌಪದಿ ದೇವಿಯ ಆರಾಧನೆಯಾಗಿ ತಿಗಳ ಸಮುದಾಯದವರು ಅತ್ಯಂತ ಭಕ್ತಿಯಿಂದ ಆಚರಿಸುತ್ತಾರೆ. ಹಳೆಯ ಬೆಂಗಳೂರಿನ ಬೀದಿಗಳಲ್ಲಿ ನಡೆಯುವ ಮೆರವಣಿಗೆ ರೋಮಾಂಚಕವಾಗಿರುತ್ತದೆ.

  • ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ:

    ಸಮಯ: ಜನವರಿ (ಗಣರಾಜ್ಯೋತ್ಸವ) ಮತ್ತು ಆಗಸ್ಟ್ (ಸ್ವಾತಂತ್ರ್ಯ ದಿನಾಚರಣೆ).

    ವಿಶೇಷತೆ: ಈ ಪ್ರದರ್ಶನಗಳು ಲಾಲ್‌ಬಾಗ್ ಅನ್ನು ಹೂವಿನ ಲೋಕವನ್ನಾಗಿ ಬದಲಾಯಿಸುತ್ತವೆ. ಕರ್ನಾಟಕದಾದ್ಯಂತದ ಪ್ರವಾಸಿಗರು ಇದನ್ನು ನೋಡಲು ಬರುತ್ತಾರೆ.

ಬೆಂಗಳೂರಿನ ಸಮೀಪವಿರುವ ಪ್ರವಾಸಿ ತಾಣಗಳು

ಬೆಂಗಳೂರಿನ ಹೊರವಲಯವು ನಗರ ಜೀವನ ಜಂಜಾಟದಿಂದ ಮುಕ್ತಿ ನೀಡುವ ರಮಣೀಯ ತಾಣಗಳನ್ನು ಹೊಂದಿದೆ.

  • ನಂದಿ ಬೆಟ್ಟ: ಸೂರ್ಯೋದಯದ ವೀಕ್ಷಣೆ, ತಂಪಾದ ಗಾಳಿ ಮತ್ತು ಐತಿಹಾಸಿಕ ಕೋಟೆಗೆ ಹೆಸರುವಾಸಿಯಾದ ಪ್ರಸಿದ್ಧ ಗಿರಿಧಾಮ. ಮುಂಜಾನೆಯ ಪ್ರವಾಸಕ್ಕೆ ಇದು ಸೂಕ್ತ ಸ್ಥಳ.

ಪ್ರವಾಸಿ ಮಾಹಿತಿ

ಸಂಪರ್ಕ

  • ವಿಮಾನದ ಮೂಲಕ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (BLR) ಕರ್ನಾಟಕದ ಪ್ರಮುಖ ವಿಮಾನಯಾನ ಕೇಂದ್ರವಾಗಿದೆ.
  • ರೈಲು ಮೂಲಕ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ (Majestic), ಯಶವಂತಪುರ ಸೇರಿದಂತೆ ಅನೇಕ ರೈಲು ನಿಲ್ದಾಣಗಳು ರಾಜ್ಯದ ಎಲ್ಲಾ ಭಾಗಗಳಿಗೆ ಸಂಪರ್ಕ ಕಲ್ಪಿಸುತ್ತವೆ.
  • ರಸ್ತೆ ಮೂಲಕ: ಕರ್ನಾಟಕದ ಪ್ರಮುಖ ಪಟ್ಟಣಗಳು ಮತ್ತು ಜಿಲ್ಲೆಗಳಿಗೆ ಬೆಂಗಳೂರಿನಿಂದ ವಿಶಾಲವಾದ ರಸ್ತೆ ಜಾಲವಿದೆ.

ಭೇಟಿ ನೀಡಲು ಸೂಕ್ತ ಸಮಯ ಬೆಂಗಳೂರಿಗೆ ವರ್ಷದ ಯಾವುದೇ ಸಮಯದಲ್ಲಿ ಭೇಟಿ ನೀಡಬಹುದು. ಆದರೂ, ಅಕ್ಟೋಬರ್ ನಿಂದ ಫೆಬ್ರವರಿ ವರೆಗಿನ ಹವಾಮಾನವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು, ವಾಕಿಂಗ್ ಮಾಡಲು ಮತ್ತು ಸಾಂಸ್ಕೃತಿಕ ಅನ್ವೇಷಣೆಗೆ ಆಹ್ಲಾದಕರವಾಗಿರುತ್ತದೆ.

ಪ್ರವಾಸದ ಯೋಜನೆ

  • ದಿನ 1: ಬೆಂಗಳೂರು ಅರಮನೆ, ಕೆ.ಆರ್. ಮಾರುಕಟ್ಟೆ, ಕಬ್ಬನ್ ಪಾರ್ಕ್ ಮತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ.
  • ದಿನ 2: ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್, ಮ್ಯೂಸಿಯಂಗಳು ಮತ್ತು ಸ್ಥಳೀಯ ಆಹಾರ ಸವಿಯುವುದು.
  • ದಿನ 3: ಮುಂಜಾನೆ ನಂದಿ ಬೆಟ್ಟಕ್ಕೆ ಭೇಟಿ, ಕೆರೆ ದಡದಲ್ಲಿ ನಡಿಗೆ ಮತ್ತು ಶಾಪಿಂಗ್.

ಹತ್ತಿರದ ಜಿಲ್ಲೆಗಳು ಮತ್ತು ಪ್ರಮುಖ ಪಟ್ಟಣಗಳು

ಕರ್ನಾಟಕದ ರಾಜಧಾನಿಯಾಗಿರುವ ಬೆಂಗಳೂರು, ರಾಜ್ಯದ ಇತರೆ ಜಿಲ್ಲೆಗಳಿಗೆ ಉತ್ತಮ ಸಂಪರ್ಕ ಹೊಂದಿದೆ.

  • ಬೆಂಗಳೂರು ಗ್ರಾಮಾಂತರ: ರಮಣೀಯ ಬೆಟ್ಟಗಳು, ಕೆರೆಗಳು ಮತ್ತು ಪಾರಂಪರಿಕ ಕೋಟೆಗಳಿಗೆ ಹೆಸರುವಾಸಿ.
  • ರಾಮನಗರ: ಕಲ್ಲಿನ ಬೆಟ್ಟಗಳು, ರೇಷ್ಮೆ ಉತ್ಪಾದನೆ ಮತ್ತು ಚಲನಚಿತ್ರ ಚಿತ್ರೀಕರಣ ತಾಣಗಳಿಗೆ ಪ್ರಸಿದ್ಧ (ಶೋಲೆ ಬೆಟ್ಟ).
  • ತುಮಕೂರು: ದೇವಾಲಯಗಳು, ಬೆಟ್ಟಗಳು ಮತ್ತು ಸಿದ್ದಗಂಗೆಯಂತಹ ಆಧ್ಯಾತ್ಮಿಕ ಕೇಂದ್ರಗಳಿಗೆ ಹೆಸರುವಾಸಿ.
  • ಕೋಲಾರ: ಕೋಟೆಗಳು, ದೇವಾಲಯಗಳು ಮತ್ತು ಚಿನ್ನದ ಗಣಿ ಇತಿಹಾಸ ಹೊಂದಿರುವ ಜಿಲ್ಲೆ.

ತನ್ನ ಬೇರುಗಳನ್ನು ಮರೆಯದೆ ಬೆಳೆಯುತ್ತಿರುವ ನಗರ ಬೆಂಗಳೂರು. ಮುಕ್ತ ಸ್ಥಳಗಳು, ಇತಿಹಾಸದ ಪದರಗಳು ಮತ್ತು ನಾವೀನ್ಯತೆಯ ಚೈತನ್ಯದೊಂದಿಗೆ ಇದು ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಇಲ್ಲಿ ಕರ್ನಾಟಕದ ಭೂತ, ವರ್ತಮಾನ ಮತ್ತು ಭವಿಷ್ಯವು ದೈನಂದಿನ ಕ್ಷಣಗಳಲ್ಲಿ ಒಂದಾಗಿ ಬೆರೆಯುತ್ತವೆ.

ಭೇಟಿ ನೀಡಲು ಉತ್ತಮ ಸಮಯ
ವರ್ಷವಿಡೀ ನೀವು ಈ ಸ್ಥಳಕ್ಕೆ ಭೇಟಿ ನೀಡಬಹುದು
ಇದರಿಗಾಗಿ ಪ್ರಸಿದ್ಧ
ವಿಶ್ವನಗರ, ಸಿಲಿಕಾನ್ ಕಣಿವೆ

ಆಕರ್ಷಣೆಗಳು

ಮ್ಯೂಸಿಯಂ ಆಫ್ ಆರ್ಟ್ ಅಂಡ್ ಫೋಟೋಗ್ರಫಿ, ಬೆಂಗಳೂರು

ಬೆಂಗಳೂರಿನ ಹೊಸ ಸಾಂಸ್ಕೃತಿಕ ಹೆಗ್ಗುರುತು: ಕಲೆ ಮತ್ತು ತಂತ್ರಜ್ಞಾನದ ಸಮ್ಮಿಲನ. ವಸ್ತುಸಂಗ್ರಹಾಲಯದ ಬಗ್ಗೆ: ಕಥನ ಕಲೆಯ ...

ಕರ್ನಾಟಕ ಚಿತ್ರಕಲಾ ಪರಿಷತ್ (ಸಿ.ಕೆ.ಪಿ), ಬೆಂಗಳೂರು

ಕರ್ನಾಟಕ ಚಿತ್ರಕಲಾ ಪರಿಷತ್ (ಸಿ.ಕೆ.ಪಿ) ಬೆಂಗಳೂರಿನ ದೃಶ್ಯ ಕಲೆಗಳ ರಂಗದ ಹೃದಯಬಡಿತವಾಗಿದೆ. ಕುಮಾರ ಕೃಪಾ ರಸ್ತೆಯ ಹಸಿರ...

ಇಸ್ಕಾನ್ ದೇವಾಲಯ, ಬೆಂಗಳೂರು

ಆಧ್ಯಾತ್ಮಿಕ, ದೈವಿಕ ...

ನಂದಿ ಬೆಟ್ಟ

ಜನಪ್ರಿಯ ಗಿರಿಧಾಮ ವಿಹಾರ ...

ಕಬ್ಬನ್ ಪಾರ್ಕ್

ನಗರದ ಮಧ್ಯಭಾಗದಲ್ಲಿ ಸುಮಾರು 300 ಎಕರೆಗಳಷ್ಟು ವಿಸ್ತಾರವಾಗಿ ಹರಡಿರುವ ಕಬ್ಬನ್ ಪಾರ್ಕ್, ಬೆಂಗಳೂರಿನ ಜನರಿಗೆ ನಗರದ ಗದ್...

ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್: ಬೆಂಗಳೂರಿನ ಹಸಿರು ಸಿರಿ

ಬೆಂಗಳೂರಿನಲ್ಲಿ ಪ್ರಮುಖವಾಗಿ ನೋಡಲೇಬೇಕಾದ ತಾಣಗಳಲ್ಲಿ ಲಾಲ್‌ಬಾಗ್ ಮೊದಲ ಸ್ಥಾನದಲ್ಲಿದೆ. ನಗರದ ಮಧ್ಯಭಾಗದಲ್ಲಿರುವ 240 ...

ಮ್ಯೂಸಿಯಂ ಆಫ್ ಆರ್ಟ್ ಅಂಡ್ ಫೋಟೋಗ್ರಫಿ, ಬೆಂಗಳೂರು

ಬೆಂಗಳೂರಿನ ಹೊಸ ಸಾಂಸ್ಕೃತಿಕ ಹೆಗ್ಗುರುತು: ಕಲೆ ಮತ್ತು ತಂತ್ರಜ್ಞಾನದ ಸಮ್ಮಿಲನ. ವಸ್ತುಸಂಗ್ರಹಾಲಯದ ಬಗ್ಗೆ: ಕಥನ ಕಲೆಯ ...

ಕರ್ನಾಟಕ ಚಿತ್ರಕಲಾ ಪರಿಷತ್ (ಸಿ.ಕೆ.ಪಿ), ಬೆಂಗಳೂರು

ಕರ್ನಾಟಕ ಚಿತ್ರಕಲಾ ಪರಿಷತ್ (ಸಿ.ಕೆ.ಪಿ) ಬೆಂಗಳೂರಿನ ದೃಶ್ಯ ಕಲೆಗಳ ರಂಗದ ಹೃದಯಬಡಿತವಾಗಿದೆ. ಕುಮಾರ ಕೃಪಾ ರಸ್ತೆಯ ಹಸಿರ...

ಇಸ್ಕಾನ್ ದೇವಾಲಯ, ಬೆಂಗಳೂರು

ಆಧ್ಯಾತ್ಮಿಕ, ದೈವಿಕ ...

ನಂದಿ ಬೆಟ್ಟ

ಜನಪ್ರಿಯ ಗಿರಿಧಾಮ ವಿಹಾರ ...

ಕಬ್ಬನ್ ಪಾರ್ಕ್

ನಗರದ ಮಧ್ಯಭಾಗದಲ್ಲಿ ಸುಮಾರು 300 ಎಕರೆಗಳಷ್ಟು ವಿಸ್ತಾರವಾಗಿ ಹರಡಿರುವ ಕಬ್ಬನ್ ಪಾರ್ಕ್, ಬೆಂಗಳೂರಿನ ಜನರಿಗೆ ನಗರದ ಗದ್...

ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್: ಬೆಂಗಳೂರಿನ ಹಸಿರು ಸಿರಿ

ಬೆಂಗಳೂರಿನಲ್ಲಿ ಪ್ರಮುಖವಾಗಿ ನೋಡಲೇಬೇಕಾದ ತಾಣಗಳಲ್ಲಿ ಲಾಲ್‌ಬಾಗ್ ಮೊದಲ ಸ್ಥಾನದಲ್ಲಿದೆ. ನಗರದ ಮಧ್ಯಭಾಗದಲ್ಲಿರುವ 240 ...

ಭೇಟಿ ನೀಡಲು ಉಪಯುಕ್ತ ಸೂಚನೆ ಹಾಗೂ ಸಲಹೆಗಳು

ಭೇಟಿ ನೀಡಲು ಉತ್ತಮ ಸಮಯ

  • All year round
  • October to March is the most pleasant
ಇನ್ನಷ್ಟು ಓದಿ →

ಸಂಚಾರ ಹೇಗೆ?

  • Metro
  • Cabs
  • KSRTC buses
  • Autos
ಇನ್ನಷ್ಟು ಓದಿ →

ಅಗತ್ಯ ವಸ್ತುಗಳು

  • Casuals
  • Sunglasses
  • Trendy
ಇನ್ನಷ್ಟು ಓದಿ →

ಮುಂಬರುವ ಕಾರ್ಯಕ್ರಮಗಳು

23Oct
–
25Oct
ಕಿತ್ತೂರು ಉತ್ಸವ
ಕಾರ್ಯಕ್ರಮ

ಕಿತ್ತೂರು ಉತ್ಸವ

ಬೆಳಗಾವಿ ಜಿಲ್ಲೆಯಲ್ಲಿ ನಡೆಯುವ ಕಿತ್ತೂರು ಉತ್ಸವವು ವರ್ಣರಂಜಿತ ರಾಜ್ಯಮಟ್ಟದ ಹಬ್ಬವಾಗಿದೆ. ಭಾರತದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಕರೆಯಲ್ಪಡುವ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನ ಶೌರ್ಯವನ್ನು ಗೌರವಿಸಲು ಇದನ್ನು ಆಚರಿಸಲಾಗುತ್ತದೆ. ಐತಿಹಾಸಿಕ ಕಿತ್ತೂರು ಕೋಟೆಯ ಹಿನ್ನೆಲೆಯಲ್ಲಿ ನಡೆಯುವ ಈ ಉತ್ಸವವು ದೇಶಭಕ್ತಿಯ ಸ್ಮರಣೆಯ ಜೊತೆಗೆ ವರ್ಣರಂಜಿತ ಜಾನಪದ ಸಂಸ್ಕೃತಿ, ಸಂಗೀತ ಕಚೇರಿಗಳು, ವಸ್ತುಪ್ರದರ್ಶನ ಮತ್ತು ಸ್ಥಳೀಯ ತಿನಿಸುಗಳ ಸಮ್ಮಿಲನವಾಗಿದೆ. ನಿಮಗೆ ತಿಳಿದಿದೆಯೇ? ಉತ್ಸವದ ಪ್ರಮುಖ ಆಕರ್ಷಣೆಗಳು ದಿನಾಂಕ ಮತ್ತು ಸಮಯ ಕಿತ್ತೂರು ಉತ್ಸವವನ್ನು ಸಾಮಾನ್ಯವಾಗಿ 1824ರ […]

21Dec
–
31Jan
ಕರಾವಳಿ ಉತ್ಸವ 2025 – ದಕ್ಷಿಣ ಕನ್ನಡ
ಕಾರ್ಯಕ್ರಮ

ಕರಾವಳಿ ಉತ್ಸವ 2025 – ದಕ್ಷಿಣ ಕನ್ನಡ

ದಕ್ಷಿಣ ಕನ್ನಡ – ಮಂಗಳೂರು

6Sept
–
7Sept
ಭರಚುಕ್ಕಿ ಜಲಪಾತೋತ್ಸವ
ಕಾರ್ಯಕ್ರಮ

ಭರಚುಕ್ಕಿ ಜಲಪಾತೋತ್ಸವ

ಚಾಮರಾಜನಗರ

14Sept
–
15Sept
ಗಗನಚುಕ್ಕಿ ಜಲಪಾತೋತ್ಸವ
ಕಾರ್ಯಕ್ರಮ

ಗಗನಚುಕ್ಕಿ ಜಲಪಾತೋತ್ಸವ

ಮಂಡ್ಯ

23Sept
–
2Oct
ಮೈಸೂರು ದಸರಾ ಹಬ್ಬ – ನಮ್ಮ ಕರ್ನಾಟಕದ ನಾಡಹಬ್ಬ
ಕಾರ್ಯಕ್ರಮ

ಮೈಸೂರು ದಸರಾ ಹಬ್ಬ – ನಮ್ಮ ಕರ್ನಾಟಕದ ನಾಡಹಬ್ಬ

ಮೈಸೂರು

17Oct
ಕಾವೇರಿ ಸಂಕ್ರಮಣ
ಕಾರ್ಯಕ್ರಮ

ಕಾವೇರಿ ಸಂಕ್ರಮಣ

ಕೊಡಗು

1Nov
ಕನ್ನಡ ರಾಜ್ಯೋತ್ಸವ
ಕಾರ್ಯಕ್ರಮ

ಕನ್ನಡ ರಾಜ್ಯೋತ್ಸವ

ಕರ್ನಾಟಕ

1Jan
–
31Jan
ಉಡುಪಿ ಪರ್ಯಾಯ ಉತ್ಸವ
ಕಾರ್ಯಕ್ರಮ

ಉಡುಪಿ ಪರ್ಯಾಯ ಉತ್ಸವ

ಉಡುಪಿ

1Jan
–
31Jan
ಪಟ್ಟದಕಲ್ಲು ನೃತ್ಯೋತ್ಸವ
ಕಾರ್ಯಕ್ರಮ

ಪಟ್ಟದಕಲ್ಲು ನೃತ್ಯೋತ್ಸವ

ಬಾಗಲಕೋಟೆ

1Feb
–
31Mar
ಲಕ್ಕುಂಡಿ ಉತ್ಸವ
ಕಾರ್ಯಕ್ರಮ

ಲಕ್ಕುಂಡಿ ಉತ್ಸವ

ಗದಗ

1Feb
–
28Feb
ಚಾಲುಕ್ಯ ಉತ್ಸವ
ಕಾರ್ಯಕ್ರಮ

ಚಾಲುಕ್ಯ ಉತ್ಸವ

ಬಾಗಲಕೋಟೆ

13Feb
–
15Feb
ಹಂಪಿ ಉತ್ಸವ 2026
ಕಾರ್ಯಕ್ರಮ

ಹಂಪಿ ಉತ್ಸವ 2026

ವಿಜಯನಗರ

1Jul
–
31Jul
ಕನಕಗಿರಿ ಉತ್ಸವ
ಕಾರ್ಯಕ್ರಮ

ಕನಕಗಿರಿ ಉತ್ಸವ

ಕೊಪ್ಪಳ

ಕ್ಯಾಲೆಂಡರ್ ಆಗಿ ನೋಡು
ಕ್ಯಾಲೆಂಡರ್ ಆಗಿ ನೋಡು

ಸ್ಥಳೀಯ ಪ್ರವಾಸಿ ತಾಣಗಳು

ಚಾಮರಾಜನಗರ

ತುಮಕೂರು

ಎಲ್ಲವನ್ನೂ ವೀಕ್ಷಿಸಿ
ಎಲ್ಲವನ್ನೂ ವೀಕ್ಷಿಸಿ

ಗ್ಯಾಲರಿ

Gallery Image 1
ಬ್ಲಾಕ್ ಪ್ಯಾಂಥರ್, ಕಬಿನಿ

ಕಬಿನಿ ಕಾಡಿನ ಮರೆಯಾಗುವ ಕಪ್ಪು ಚಿರತೆ (ಬ್ಲಾಕ್ ಪ್ಯಾಂಥರ್) ಜಾಗತಿಕ ಖ್ಯಾತಿ ಗಳಿಸಿರುವ ಅಪರೂಪದ ವನ್ಯಜೀವಿ ಅದ್ಭುತವಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದಟ್ಟ ಅರಣ್ಯಗಳಲ್ಲಿ ಸಾಂದರ್ಭಿಕವಾಗಿ ಕಾಣಸಿಗುವ ಇದು, ಕರ್ನಾಟಕದ ಶ್ರೀಮಂತ ಜೀವವೈವಿಧ್ಯಕ್ಕೆ ರೋಮಾಂಚನಕಾರಿ ಆಕರ್ಷಣೆಯನ್ನು ನೀಡುತ್ತದೆ.

Gallery Image 2
ಮರವಂತೆ ಬೀಚ್

ಮರವಂತೆ ಬೀಚ್ ಒಂದು ವಿಶಿಷ್ಟ ಕರಾವಳಿ ಅನುಭವವನ್ನು ನೀಡುತ್ತದೆ, ಇಲ್ಲಿ ಹೆದ್ದಾರಿಯು ಒಂದು ಬದಿಯಲ್ಲಿ ಅಬ್ಬರಿಸುವ ಅರಬ್ಬಿ ಸಮುದ್ರ ಮತ್ತು ಇನ್ನೊಂದು ಬದಿಯಲ್ಲಿ ಶಾಂತ ಸೌಪರ್ಣಿಕಾ ನದಿಯ ನಡುವೆ ಸಾಗುತ್ತದೆ. ಭೂದೃಶ್ಯಗಳ ಬೆರಗುಗೊಳಿಸುವ ವ್ಯತಿರಿಕ್ತತೆ, ಸುವರ್ಣ ಮರಳು ಮತ್ತು ರಮಣೀಯ ಸೂರ್ಯಾಸ್ತಗಳೊಂದಿಗೆ, ಇದು ಕರ್ನಾಟಕದ ಅತ್ಯಂತ ಸುಂದರವಾದ ಬೀಚ್ ಡ್ರೈವ್‌ಗಳಲ್ಲಿ ಒಂದಾಗಿದೆ.

Gallery Image 3
ಕಂಬಳ

ಕಂಬಳವು ಕರ್ನಾಟಕದ ಕರಾವಳಿ ಪ್ರದೇಶಗಳ ನೀರಿನಿಂದ ತುಂಬಿದ ಭತ್ತದ ಗದ್ದೆಗಳಲ್ಲಿ ನಡೆಯುವ ಸಾಂಪ್ರದಾಯಿಕ ಎಮ್ಮೆ ಓಟವಾಗಿದೆ. ಇದು ಹೆಚ್ಚು ಶಕ್ತಿಯುತ ಗ್ರಾಮೀಣ ಕ್ರೀಡೆಯಾಗಿದ್ದು, ಸಂಪ್ರದಾಯ, ಸಮುದಾಯದ ಹೆಮ್ಮೆ ಮತ್ತು ಕ್ರೀಡಾ ಮನೋಭಾವವನ್ನು ಮಣ್ಣಿನಿಂದ ಕೂಡಿದ, ರೋಮಾಂಚನಕಾರಿ ಸಂಭ್ರಮದಲ್ಲಿ ಬೆಸೆಯುತ್ತದೆ.

Gallery Image 4
ಬೀಚ್‌ನಲ್ಲಿ ಸೂರ್ಯಾಸ್ತ

ಅರಬ್ಬಿ ಸಮುದ್ರದಲ್ಲಿ ಸೂರ್ಯ ಮುಳುಗುತ್ತಿದ್ದಂತೆ, ಕರ್ನಾಟಕದ ಕರಾವಳಿಯು ಚಿನ್ನ ಮತ್ತು ಕೆಂಪುವರ್ಣದ ಕ್ಯಾನ್ವಾಸ್ ಆಗಿ ರೂಪಾಂತರಗೊಳ್ಳುತ್ತದೆ. ನೀವು ಗೋಕರ್ಣ, ಮಲ್ಪೆ ಅಥವಾ ಕೌಪ್‌ನಲ್ಲಿರಲಿ, ಸೌಮ್ಯ ಅಲೆಗಳು, ತೂಗಾಡುವ ತಾಳೆ ಮರಗಳು ಮತ್ತು ರೋಮಾಂಚಕ ಆಕಾಶವು ಶಾಂತವಾದ, ಮನಸ್ಸಿಗೆ ಮುದ ನೀಡುವ ದೃಶ್ಯವನ್ನು ಸೃಷ್ಟಿಸುತ್ತದೆ, ಇದು ಬೆಳಕು ಮರೆಯಾದ ನಂತರವೂ ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ.

Tourism Video
Tourism Highlights
Watch our tourism video showcasing key attractions.
Gallery Image 6
ಮೈಸೂರು ಅರಮನೆ ಪ್ರಕಾಶಮಾನ

ಹಗಲಿನಲ್ಲಿ ರಾಜಗಾಂಭೀರ್ಯದಿಂದ ಕೂಡಿರುವ ಮೈಸೂರು ಅರಮನೆ ರಾತ್ರಿಯಲ್ಲಿ ಮಾಂತ್ರಿಕವಾಗಿ ತೋರುತ್ತದೆ—ಸುಮಾರು 100,000 ಬಲ್ಬ್‌ಗಳಿಂದ ಬೆಳಗಿದಾಗ ಅದು ಕಣ್ಮನ ಸೆಳೆಯುತ್ತದೆ. ಈ ವಾರಾಂತ್ಯದ ದೃಶ್ಯವು ಐತಿಹಾಸಿಕ ತಾಣವನ್ನು ಕಾಲ್ಪನಿಕ ದೃಶ್ಯವಾಗಿ ಪರಿವರ್ತಿಸುತ್ತದೆ, ಅದರ ವೈಭವಕ್ಕೆ ಮಾರುಹೋಗುವ ಜನಸಂದಣಿಯನ್ನು ಆಕರ್ಷಿಸುತ್ತದೆ.

Gallery Image 7
ಯಕ್ಷಗಾನ ಜನಪದ ಕಲೆ

ಯಕ್ಷಗಾನವು ಕರಾವಳಿ ಕರ್ನಾಟಕದ ಒಂದು ರೋಮಾಂಚಕ ಜನಪದ ರಂಗಭೂಮಿ ರೂಪವಾಗಿದ್ದು, ನೃತ್ಯ, ಸಂಗೀತ, ವಿಸ್ತಾರವಾದ ವೇಷಭೂಷಣಗಳು ಮತ್ತು ಕಥೆ ಹೇಳುವಿಕೆಯನ್ನು ಬೆಸೆಯುತ್ತದೆ. ಇದರ ನಾಟಕೀಯ ಅಭಿವ್ಯಕ್ತಿಗಳು ಮತ್ತು ಪೌರಾಣಿಕ ವಿಷಯಗಳೊಂದಿಗೆ, ಇದು ಆಧ್ಯಾತ್ಮಿಕ ಮತ್ತು ಅದ್ಭುತವಾದ ರಾತ್ರಿಯಿಡೀ ಪ್ರದರ್ಶನಗಳ ಮೂಲಕ ಪ್ರೇಕ್ಷಕರನ್ನು ಆಕರ್ಷಿಸುತ್ತದೆ.

Gallery Image 8
ವಿಧಾನಸೌಧ

ಬೆಂಗಳೂರಿನಲ್ಲಿ ಎತ್ತರವಾಗಿ ನಿಂತಿರುವ ವಿಧಾನಸೌಧವು ಕರ್ನಾಟಕದ ಶಾಸಕಾಂಗದ ಕೇಂದ್ರ ಸ್ಥಾನ ಮತ್ತು ರಾಜ್ಯದ ಹೆಮ್ಮೆಯ ಸಂಕೇತವಾಗಿದೆ. ಇದರ ಭವ್ಯವಾದ ನವ ದ್ರಾವಿಡ ವಾಸ್ತುಶಿಲ್ಪ ಮತ್ತು ರಾತ್ರಿ ವೇಳೆಯಲ್ಲಿ ಬೆಳಗುವ ಮುಂಭಾಗವು ಸಂಪ್ರದಾಯವನ್ನು ಪ್ರಜಾಪ್ರಭುತ್ವದ ಆಡಳಿತದೊಂದಿಗೆ ಬೆಸೆಯುವ ಒಂದು ಗಮನಾರ್ಹ ಹೆಗ್ಗುರುತಾಗಿದೆ.

Gallery Image 9
ಕಲ್ಲಿನ ರಥ, ಹಂಪಿ

ವಿಜಯನಗರ ವಾಸ್ತುಶಿಲ್ಪದ ಒಂದು ಮೇರುಕೃತಿ, ಹಂಪಿಯ ವಿಠ್ಠಲ ದೇವಸ್ಥಾನದಲ್ಲಿರುವ ಕಲ್ಲಿನ ರಥವು ಭಾರತದ ಅತ್ಯಂತ ಜನಪ್ರಿಯ ಸ್ಮಾರಕಗಳಲ್ಲಿ ಒಂದಾಗಿದೆ. ಸಂಪೂರ್ಣವಾಗಿ ಕಲ್ಲಿನಲ್ಲಿ ಕೆತ್ತಿದ ಈ ಏಕಶಿಲಾ ರಥವು ಒಂದು ಕಾಲದ ಕಲಾತ್ಮಕ ಪ್ರತಿಭೆ ಮತ್ತು ಎಂಜಿನಿಯರಿಂಗ್ ಕೌಶಲ್ಯಕ್ಕೆ ಸಾಕ್ಷಿಯಾಗಿ ನಿಂತಿದೆ.